ಕಾರ್ಮಿಕ ಇಲಾಖೆಯಿಂದ ವಿವಿಧ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಧನ

ಕೋವಿಡ್-19  ಸಾಂಕ್ರಾಮಿಕ ರೋಗದ 2ನೇ ಅಲೆಯ ಹಿನ್ನಲೆಯಲ್ಲಿ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಒಂದು ಬಾರಿಯ ಸಹಾಯಧನ ಕ್ರಮವಾಗಿ 3000 ರೂ. ಹಾಗೂ 2000 ರೂ. ಗಳನ್ನು  ಸಮರ್ಪಕವಾಗಿ ಸಂದಾಯಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅರ್ಜಿದಾರ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಯಲ್ಲಿ ಇಟ್ಟುಕೊಂಡಿರಬೇಕು ಮತ್ತು ಅಂತಹ ಚಾಲ್ತಿಯಿರುವ ಖಾತೆ ವಿವರಗಳನ್ನೇ ಆನ್‍ಲೈನ್ ನಲ್ಲಿ  ಅರ್ಜಿ ಸಲ್ಲಿಸುವಾಗ ದಾಖಲಿಸಬೇಕು. ಆನ್ ಲೈನ್ ದಲ್ಲಿ ದಾಖಲಿಸಿದ ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಲಿಂಕ್ ಮಾಡಿಸಿರಬೇಕು.

ಬ್ಯಾಂಕ್ ಖಾತೆ ಚಾಲ್ತಿಯಿಲ್ಲದ ಹಾಗೂ ಆಧಾರ ಲಿಂಕ್ ಇಲ್ಲದ ಫಲಾನುಭವಿಗಳ ಖಾತೆಗೆ ಸಹಾಯಧನ ಜಮೆಯಾಗದೇ ಇರುವ ಸಂಭವವಿರುವ ಹಿನ್ನಲೆಯಲ್ಲಿ ಈ ಬಗ್ಗೆ ಫಲಾನುಭವಿಗಳು ಅರ್ಜಿ ಸಲ್ಲಿಸುವ ಮುಂಚಿತವಾಗಿ ಖಚಿತ ಪಡಿಸಿಕೊಳ್ಳಬೇಕು.

ಅರ್ಜಿದಾರರು ಉದ್ಯೋಗ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯವಾಗಿದ್ದು, ಉದ್ಯೋಗ ಪ್ರಮಾಣ ಪತ್ರವನ್ನು ನಿಗದಿತ ಅಧಿಕಾರಿಗಳಿಂದ ಪಡೆದು ಕ್ರಮಬದ್ಧವಾದ ಉದ್ಯೋಗ ಪ್ರಮಾಣ ಪತ್ರ ಅರ್ಜಿಯೊಂದಿಗೆ ಆನ್‍ಲೈನನಲ್ಲಿ ಅಳವಡಿಸಬೇಕು.

ಈ ಬಗ್ಗೆ ಹಚ್ಚಿನ ಮಾಹಿತಿಗಾಗಿ ಇಲಾಖೆಯ ದೂ.ಸಂ: 0836-23563222356503 ಗೇ ಸಂಪರ್ಕಿಸಬಹುದೆಂದು ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!