ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿ, ನೋಡಲ್ ಅಧಿಕಾರಿಗಳ ನೇಮಕ

ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅತಿವೃಷ್ಠಿಯಿಂದ ಪ್ರವಾಹ ಉಂಟಾಗಬಹುದಾದ ಸಂಭವನೀಯತೆ ಇದೆ.

ಜನ ಜಾನುವಾರು,ಮನೆ ಮತ್ತಿತರ ಹಾನಿ ಸಂಭವಿಸಿದರೆ ತುರ್ತು ಪರಿಹಾರ ಕ್ರಮಗಳನ್ನು ಜರುಗಿಸಲು ಪ್ರತಿ ತಾಲ್ಲೂಕಿಗೆ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ನಿಯೋಜಿಸಲಾದ ತಾಲ್ಲೂಕುಗಳ ನೋಡಲ್ ಅಧಿಕಾರಿಗಳು ಅತಿವೃಷ್ಠಿ ಹಾನಿಯ ಪ್ರಮಾಣ ತಗ್ಗಿಸುವುದು, ಹಾನಿಯ ಮಾಹಿತಿ, ವಿವರಗಳನ್ನು ಒದಗಿಸಲಿದ್ದಾರೆ.

ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವುದು, ತಾಲ್ಲೂಕು ಮಟ್ಟದ ವಿಪತ್ತು ನಿರ್ವಹಣೆ ಸಮಿತಿಯ ಕಾರ್ಯ ಪರಿಶೀಲಿಸುವುದು ನೋಡಲ್ ಅಧಿಕಾರಿಗಳ ಕೆಲಸವಾಗಿದೆ.

ಕೆರೆಗಳು ಭರ್ತಿಯಾಗಿ ಕೋಡಿ ಹರಿದು ಅಥವಾ ಹಳ್ಳಗಳು ತುಂಬಿ ಪ್ರವಾಹ ಉಂಟಾಗುವ ಸಂಭವನೀಯತೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದು ಸೇರಿದಂತೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಿದ್ದಾರೆ.

ನೋಡಲ್ ಅಧಿಕಾರಿಗಳ ವಿವರ ಇಲ್ಲಿದೆ:

  • ಧಾರವಾಡ ತಾಲೂಕು – ಅಶೋಕ ತೇಲಿ, ಉಪವಿಭಾಗಾಧಿಕಾರಿಗಳು-8123295366.
  • ಹುಬ್ಬಳ್ಳಿ ತಾಲೂಕು- ಮಂಜುನಾಥ ಅಂತರವಳ್ಳಿ ಉಪಕೃಷಿ ನಿರ್ದೇಶಕರು-8277931272.
  • ಹುಬ್ಬಳ್ಳಿ ನಗರ- ಅಜೀಜ್ ದೇಸಾಯಿ, ಜಂಟಿ ಆಯುಕ್ತರು, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ -7019764507.
  • ನವಲಗುಂದ ತಾಲೂಕು-ಸುಧೀರ್ ಸಾವ್ಕಾರ್, ಹಿರಿಯ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ-9845297783.
  • ಕುಂದಗೋಳ ತಾಲೂಕು- ರೇಖಾ ಡೊಳ್ಳಿನವರ, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ, -9480864001.
  • ಕಲಘಟಗಿ ತಾಲೂಕು-ಗೋಪಾಲ ಲಮಾಣಿ, ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-8748067302.
  • ಅಳ್ನಾವರ ತಾಲೂಕು-ಡಾ.ಉಮೇಶ ಕೊಂಡಿ, ಉಪನಿರ್ದೇಶಕರು, ಪಶು ವೈದ್ಯಕೀಯ ಸೇವೆಗಳ ಇಲಾಖೆ -9900675607.
  • ಅಣ್ಣಿಗೇರಿ ತಾಲೂಕು-ಮಮತಾ ನಾಯಕ್, ನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ -9591539062 ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿಲಾಗಿದೆ.

ತಮಗೆ ವಹಿಸಲಾದ ಕರ್ತವ್ಯಗಳನ್ನು ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!