ಉಪರಾಷ್ಟ್ರಪತಿ ಅವರಿಂದ ಆ.20,22ರಂದು ಹುಬ್ಬಳ್ಳಿ ಪ್ರವಾಸ

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಗಳಾದ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಆಗಸ್ಟ್ 20 ಹಾಗೂ 22 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ.

 ಆಗಸ್ಟ್ 20 ರಂದು ಸಂಜೆ 4-15 ಗಂಟೆಗೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಸಂಜೆ 4-25 ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಹೊಸಪೇಟೆಗೆ ತೆರಳುವರು.

ಆ.22 ರಂದು ಬೆಳಿಗ್ಗೆ 9-50 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 10-05 ನಿಮಿಷಕ್ಕೆ ಅನಂತ ಗ್ರ್ಯಾಂಡ್ ಹೋಟೆಲ್‍ನ ಖಾಸಗಿ ಕಾರ್ಯಕ್ರಮಕ್ಕೆ ತೆರಳುವರು. 

ಅಂದು 10-25 ಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ. 

Share this article!

Leave a Reply

Your email address will not be published. Required fields are marked *

error: Content is protected !!