ಡಿಸೆಂಬರ್ 23 ರಂದು ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತ್

ರೈಲ್ವೆ ಅಂಚೆ ವಿಭಾಗದ ಅಂಚೆ ಇಲಾಖಾ ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತ್ತನ್ನು ಕಾರವಾರ ರಸ್ತೆಯ ರೈಲ್ವೆ ಅಂಚೆ ವಿಭಾಗದ ಅಧೀಕ್ಷಕರ ಕಾರ್ಯಾಲಯದಲ್ಲಿ ಡಿಸೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳನ್ನು ಆಲಿಸಲಾಗುವುದು.

ಗ್ರಾಮೀಣ ಅಂಚೆ ಸೇವಕರು ಮತ್ತಿತರು ಅದಾಲತ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಅದಾಲತ್‌ನಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ.

ಅದಾಲತ್ತಿನಲ್ಲಿ ತೀರ್ಮಾನಿಸುವ ಅಹವಾಲುಗಳಿದ್ದಲ್ಲಿ ಅಧೀಕ್ಷಕರು, ರೈಲ್ವೆ ಅಂಚೆ ವಿಭಾಗ, ಹುಬ್ಬಳ್ಳಿ ಅಥವಾ rmsdoHB.ka@indiapost.gov.in ಇ ಮೇಲ್ ವಿಳಾಸಕ್ಕೆ ಕಳಿಸಬಹುದು ಎಂದು ರೈಲ್ವೆ ಅಂಚೆ ಸೇವೆ ಹುಬ್ಬಳ್ಳಿ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!